ಪಕ್ಕಪಕ್ಕದಲಿ ಕುಳಿತು
ಈ ಜಗವನ್ನೆ ಮರೆತು !
ಮಾತಿಗೆ ಮಾತು ಸಾಗಿತಲ್ಲ
ಕೈ ಬೆರಳುಗಳು ಹೆಣೆದವಲ್ಲ.
ಬಣ್ಣ ಬಳಿದ ಕಾಲುಬೆರಳು
ಏನೋ ಬಯಸಿದಂತಿವೆ,
ಮೂಗ ಮೇಲಿನ ರತ್ನದ ಹರಳು
ಅದನ್ನೇ ಪುನರುಚ್ಛರಿಸಿದೆ ಹೂವೆ.
ಸ್ಪರ್ಶಕ್ಕೆ ಹಾತೊರೆದ ಮನಕೆ
ಅಪ್ಪನ್ನು ನೀಡಿದ ಮೇನಕೆ ;
ಕಪ್ಪನ್ನು ಕೇಳಿ, ದೃಷ್ಠಿ ನೆಟ್ಟು
ಸುಮ್ಮನೆ ತೋರುವೆ ಸಿಟ್ಟು.
ಹೇಳದೆ ಕೇಳದೆ ಬಿಗಿದಪ್ಪಿ
"ಹೂಂ.."ಗುಟ್ಟುತಿರುವ ನಲ್ಲೆ :
ನಿನ್ನ ತೋಳಹಾರವ ನನಗೊಪ್ಪಿ-
ಸಿ ಮೂಗಿಗೆ ಮೂಗನುಜ್ಜುವೆಯಲ್ಲೆ.
ನಿನ್ನ ದೃಷ್ಟಿಗೆ ದೃಷ್ಟಿಗೊಟ್ಟು
ನಾ ತಿಳಿದ ಮನದಾಳ ಎಷ್ಟು ?
ಒತ್ತಿ ಬಂದಾಸೆಯ ತೋರದಿರಲೇ ,
ತುಟಿಯ ಮುದ್ರೆಯನೊತ್ತೆ ಬಿಡಲೇ ?
ಮತ್ತೆ "ಹೂಂ" ಗುಟ್ಟುವೆ
ನಾನೂ "ಹೂಂ" ಗುಟ್ಟುವೆ
"ಊಹುಂ" ಎಂದು ನೀ ಕುಳಿತೆ
ಮುಗಿಸಿ ಬಿಟ್ಟೆನು ನಾ ಕವಿತೆ.
✍ ಸತೀಶ ಉ ನಡಗಡ್ಡಿ