Monday 21 January 2019

ಪೂಜ್ಯರಿಗೆ ನನ್ನ ಅಕ್ಷರ ನಮನ



ಸಾವು ಯಾರನ್ನೂ ಬಿಟ್ಟಿಲ್ಲ
ಆದರೆ, ಈ ಸಾವು ನ್ಯಾಯವಲ್ಲ.
ದೇವರನ್ನೇ ಬಿಡದ ಸಾವು
.....ಇನ್ನು ದಾನವರು ನಾವು....?
ಆದರೂ, ಈ ಸಾವು ನ್ಯಾಯವಲ್ಲ.

ಪುಣ್ಯ ಭರತ ಭೂಮಿ ಕಂಡ
ಪೂಜ್ಯ ಶ್ರೀ ಸಿದ್ದಗಂಗಾ ಈಶ-ಬ್ರಾಹ್ಮಾಂಡ,
ತ್ರಿವಿಧ ದಾಸೋಹಿ ನಡೆದೆಯಾ
ತ್ರಿಶೂಲಾಯುಧನ ಅಂಗಳಕೆ ದೇವಾ;
ಶ್ರೀ ಶಿವಕುಮಾರ ಸ್ವಾಮೀ, ನೀ ಸದಾ ಕುಮಾರ.

ಅನ್ನದ ಅಗಳು-
ನುಂಗುತ್ತಿದೆ ಉಗುಳು,
ಕಣ್ಣು ಬಿಟ್ಟೊಮ್ಮೆ ಏಳು
ಅಳುವ ಮಕ್ಕಳಿಗೆ ಸಾಂತ್ವನ ಹೇಳು
"ನಿಮ್ಮಲ್ಲಿರುವೆ; ನಗುತ, ನಲಿದಾಡುತ' ಎಂದು.

ತೆರೆದ ಹೊತ್ತಗೆಯು ಕೂತಿದೆ
ತ್ರಿಲೋಕದಜ್ಞಾನ ನೀಗಲಾರದೆ
ಲೇಖನಿಯೂ ಅಳುತಿದೆ...

               ✍ ಸೂರ್ಯ 

Wednesday 9 January 2019

ಬಾಡಿಗೆ ತಾಯ್ತನ



ಈ ಲಲಿತೆ ಎಲ್ಲರಂತಲ್ಲ
(ಅ)ಸಾಮಾನ್ಯಳೆಂದೂ ಹೇಳುವಂತಿಲ್ಲ !

ಯಾವನದೋ ಅಸೆಗಳೀಡೇರಿಕೆಗೆ
'ಮೈಲಿ'-'ಗಲ್ಲ'ಆಗಿ ನಿಂತಿಹಳು ಹೀಗೆ:

ಮತ-ಧರ್ಮದ ಕಟ್ಟಳೆಗಳ ಸುಟ್ಟಾಕೆ-
ಯ ಮೇಲೆ ಈ ಪ್ರತಿಷ್ಠೆಯ ಮೊಹರೇಕೆ ?

'ಗರ್ಭ'ವೂ ಬಾಡಿಗೆಗೆ ಸಿಗುತ್ತಿದೆ
'ಆಗರ್ಭ' ಶ್ರೀಮಂ'ತನ-ಮನ' ತಣಿದಿದೆ.

                         ✍ ಸತೀಶ ಉ ನಡಗಡ್ಡಿ