ಸಾವು ಯಾರನ್ನೂ ಬಿಟ್ಟಿಲ್ಲ
ಆದರೆ, ಈ ಸಾವು ನ್ಯಾಯವಲ್ಲ.
ದೇವರನ್ನೇ ಬಿಡದ ಸಾವು
.....ಇನ್ನು ದಾನವರು ನಾವು....?
ಆದರೂ, ಈ ಸಾವು ನ್ಯಾಯವಲ್ಲ.
ಪುಣ್ಯ ಭರತ ಭೂಮಿ ಕಂಡ
ಪೂಜ್ಯ ಶ್ರೀ ಸಿದ್ದಗಂಗಾ ಈಶ-ಬ್ರಾಹ್ಮಾಂಡ,
ತ್ರಿವಿಧ ದಾಸೋಹಿ ನಡೆದೆಯಾ
ತ್ರಿಶೂಲಾಯುಧನ ಅಂಗಳಕೆ ದೇವಾ;
ಶ್ರೀ ಶಿವಕುಮಾರ ಸ್ವಾಮೀ, ನೀ ಸದಾ ಕುಮಾರ.
ಅನ್ನದ ಅಗಳು-
ನುಂಗುತ್ತಿದೆ ಉಗುಳು,
ಕಣ್ಣು ಬಿಟ್ಟೊಮ್ಮೆ ಏಳು
ಅಳುವ ಮಕ್ಕಳಿಗೆ ಸಾಂತ್ವನ ಹೇಳು
"ನಿಮ್ಮಲ್ಲಿರುವೆ; ನಗುತ, ನಲಿದಾಡುತ' ಎಂದು.
ತೆರೆದ ಹೊತ್ತಗೆಯು ಕೂತಿದೆ
ತ್ರಿಲೋಕದಜ್ಞಾನ ನೀಗಲಾರದೆ
ಲೇಖನಿಯೂ ಅಳುತಿದೆ...
✍ ಸೂರ್ಯ