ಸಾಲು ಸಾಲು ಮರಗಳನು
ಸಾಕಿ ಸಲುಹಿದಳು ತಾಯಿ
ತಾನೆ ಹೆತ್ತ ತನ್ನ ಮಕ್ಕಳಂತೆ
ನಾಡಿಗೆ ನಾಡೇ ಹಾಡಿ ಹೊಗಳಲಿ
ಈ ಹಿರಿ ಜೀವದ ಜೀವನ ಗಾಥೆ.
ದೇವಿ ಪ್ರಕೃತಿಗೆ ತಾಯಿ
ತೊಡಿಸಿಹಳು ಹಸಿರ ಸೀರೆ;
ಉಸಿರಾಡುವ ಜೀವಗಳೆಲ್ಲ
ಮರೆಯದಿರಲಿ ಈ ತಾಯಿಯ
ನಿಸ್ವಾರ್ಥ ಸೇವೆ, ತ್ಯಾಗ ಸಮರ್ಪಣೆ.
ಹೆಣ್ಣಿಗೆ (ಪ್ರಕೃತಿಗೆ) ಹೆಣ್ಣು (ತಿಮ್ಮಕ್ಕ)
ಪರಸ್ಪರ ಸಮರ್ಪಿಸಿಕೊಂಡು
ಬದುಕಿದರೆ ಸ್ವರ್ಗವೆಂಬುದು
ಬೇರೆಲ್ಲಿಲ್ಲ : ಭುವಿಯ ನಿಜದ ಸ್ವರ್ಗ !
ತಿಮ್ಮಕ್ಕ ತಿಳಿಸಿದಳು ಈ ನಿಜ ತತ್ವ.
ವಯಸ್ಸು ಮುಪ್ಪುಗಳೆಂಬ ಕಾರಣ
ದೇಹಕ್ಕೆ ಸೀಮಿತ - ಆತ್ಮಕ್ಕಲ್ಲ;
ಧ್ಯೇಯಕ್ಕಿದ್ದರೆ ಸತ್ಯ, ಪ್ರೇಮ, ನ್ಯಾಯ
ದೈವವೇ ಸಂಗಮಿಸುವುದು ಆತ್ಮನ:
ತಿಮ್ಮಕ್ಕ ಸ್ವರ್ಗಾರೋಹಿ - ಮರಮರಗಳಲಿ .
No comments:
Post a Comment