Saturday, 21 November 2015

ಒಂದು ಸಂಜೆ ತಂದೆ ಮಗನನ್ನು ......


              ಒಂದು ಸಂಜೆ ತಂದೆ ಮಗನನ್ನು ಊರ ಮುಂದೆ ಇರುವ ದೇವಾಲಯಕ್ಕೆ ಕರೆದುಕೊಂಡು ಹೋದ..ದೇವಾಲಯದ ಹೆಬ್ಬಾಗಿಲಲ್ಲಿ ಕೆತ್ತಿದ್ದ ಸಿಂಹದ ವಿಗ್ರಹಗಳನ್ನ ನೋಡಿ ಮಗ  ಕಿರುಚುತ್ತಾ ಹೇಳಿದ "ಅಪ್ಪಾ !!ಓಡು ಓಡು ಇಲ್ಲಿ ಸಿಂಹಗಳು ಇದ್ದಾವೆ ನಮ್ಮನ್ನು ತಿಂದುಬಿಡುತ್ತವೆ...." ಓಡುತ್ತಿದ್ದ ಮಗನನ್ನು ನಿಲ್ಲಿಸಿ ತಂದೆ ಹೇಳಿದ "ಭಯ ಬೇಡ ಮಗೂ ಅವು ಕಲ್ಲಿನ ಸಿಂಹಗಳು ಅವುಗಳಿಂದ ನಮಗೆ ಏನೂ ಆಗುವುದಿಲ್ಲ."...ಮಗ ಮರುಪ್ರಶ್ನೆ ಎಸೆದ "ಕಲ್ಲಿನ ಸಿಂಹಗಳಿಂದ ನಮಗೆ ಏನೂ ಆಗುವುದಿಲ್ಲ ಎನ್ನುವುದಾದರೆ ಕಲ್ಲಿನ ದೇವರಿಂದ ಏನಾದರೂ ಆಗುತ್ತದೆ ಎಂದು ಹೇಗೆ ನಿರೀಕ್ಷಿಸುತ್ತೀಯೆ ಅಪ್ಪಾ..!! ?"
ತಂದೆ ತನ್ನ ಡೈರಿಯಲ್ಲಿ ಈ ರೀತಿ ಬರೆಯುತ್ತಾನೆ.."'ಇದುವರೆಗೆ ನನ್ನ ಮಗನ ಪ್ರಶ್ನೆ ಗೆ ಉತ್ತರ ಕೊಡಲು ಸಾಧ್ಯವಾಗಿಲ್ಲ .ಅಂದಿನಿಂದ ಕಲ್ಲಿನ ವಿಗ್ರಹ ಬಿಟ್ಟು ಮನುಷ್ಯರಲ್ಲಿ ದೇವರನ್ನು ಹುಡುಕಲು ಪ್ರಾರಂಭಿಸಿದೆ..ದೇವರನ್ನು ಕಾಣಲಾಗಲಿಲ್ಲ ಆದರೆ ಮಾನವೀಯತೆಯನ್ನು ಕಂಡೆ"...
ಎಂಥಾ ಮಾತು   !!!!


* found via WhatsApp *

Wednesday, 4 November 2015

ಕೇಳೇ ನನ್ನವಳೆ


ನನಗದೆಲ್ಲಿಯ ಬಡತನ

ಜೊತೆಯಲ್ಲಿ ನೀನಿದ್ದಾಗ
ಅದೆಂತಹ ಸಿರಿತನ
ನೀನಿರದೆ ಹೋದಾಗ

ಅನು ದಿನವು ಪ್ರೇಮೋತ್ಸವ
ಜೊತೆಗಿದ್ದರೆ ನೀ ನಸುನಗುತ
ಕಣ ಕಣದಲೂ ವಿರಹೋತ್ಸವ
ನೀ ಹೋದರೆ ಕ್ಷಣ ದೂರ 

ಹೂ ತುಟಿಯ ಮೇಲೊಂದು
ಮುತ್ತನಿಟ್ಟು ಚುಂಬಿಸಲು
ನಿನ್ನ ಕಮಲ್ಗಣ್ಣಲಿ ಮಿಂಚಿ
ಮರೆಯಾಗುವ ನಗುವಾಗಲೇ ನಾ ? 

ಬಿಗಿದುಕೊಳ್ಳಲು ಕೈಗೆ ಕೈ
ಉಸಿರಿನೊಳಗುಸಿರು ಸೇರಿ
ಬೆರೆತು ನಾವಿಬ್ಬರು ಬಾಡಿದ
ಹೂವಂತೆ ಕೂರೋಣವೇ ಗೆಳತಿ..? 

ಚರ-ಚರಣಾದಿ ಕವ್ಯಾರ್ಥದಲ್ಲಿ 
ತುಂಬಿ ತುಳುಕುವಳೆನ್ನ ಪ್ರೇಮ ಗಂಗೆ.           
ಸತೀಶ  ನಡಗಡ್ಡಿ

ಭೋರ್ಗರೆವೆ ನೀ

ಭೋರ್ಗರೆವೆ ನೀ

ಹಿಂದೆಂದಿಗಿಂತಲೂ ನೀ
ಇಂದೆನ್ನ ಮನಹೊಕ್ಕು
ಮತ್ತದೇ ಹಳೆಯ
ಹತ್ತು ಹಲವಾರು
ಭಾವಗಳಲಿ ಕುಣಿದಡುತಿರುವೆ

ಒಂದೊಂದು ಪದಕೂ ನೀ
ಹೊಸದೊಂದು ರಸಿಕತೆಯ
ರಸಾನಿಭವ ತೋರಿಸಿ
ಅನುದಿನವು ಭೋರ್ಗರೆದು
ನನ್ನಲಿ ಜನಜನಿತವಾಗಿರುವೆ

ಅನಿಸುವುದೊಮ್ಮೊಮ್ಮೆಇದೆಲ್ಲದಕೂ
ನೀನೆ ಆದಿ ಮತ್ತು ಭಾವಿಗೆ ನಂದಿ
ಅದೆಷ್ಟು  ಬಾರಿ ಸಾರಿ ನಾ
ಹೇಳಲಿ ತಿಳಿದೂ ತಿಳಿದೂ
ತಿಳಿಯಲಾರದಂತೆ ನೀನೇಕಿರುವೆ ?

ಅಂದಿನಿಂದಿಂದಿನವರೆಗೂ ನೀ
ಮುಂಬರುವ ದಿನಗಳೂ ,
ಅಸುನೀಗುವಾ ಕ್ಷಣದವರೆಗೂ
ನನ್ನ ಸಂಗಾತಿಯಾಗಿ ನೀ
ಜೊತೆಯಾಗುವೆಯಾ ನನ್ನವಳೇ..?
                 - ಸತೀಶ ನಡಗಡ್ಡಿ

RIP: DR APJ Abdul Kalam Ji


Tuesday, 3 November 2015

ನಾನು ಬಂಧಿ.


ಬಂಧಿಯಾಗಿರುವೆ ನಾನು
ನಿನ್ನ ಪ್ರೀತಿಗೆ
ಕೊಚ್ಚಿ ಹೋಗುವೆನೇನೊ ನಾ
ನಿನ್ನೊಲವಿನ ಸುಳಿಗೆ
ತಿಳಿಯದಾಗಿದೆ ಯಾಕೆಂದು
ಏನೊಂದೂ ನನಗೆ
ವಿಧಿ ಒದಗಿಸಿದ ಸುಧೆಯೋ
ಇದು ನಮ್ಮಿಬ್ಬರಿಗೆ.

                - ಸತೀಶ ಉ ನಡಗಡ್ಡಿ

Monday, 2 November 2015