Saturday 21 November 2015

ಒಂದು ಸಂಜೆ ತಂದೆ ಮಗನನ್ನು ......


              ಒಂದು ಸಂಜೆ ತಂದೆ ಮಗನನ್ನು ಊರ ಮುಂದೆ ಇರುವ ದೇವಾಲಯಕ್ಕೆ ಕರೆದುಕೊಂಡು ಹೋದ..ದೇವಾಲಯದ ಹೆಬ್ಬಾಗಿಲಲ್ಲಿ ಕೆತ್ತಿದ್ದ ಸಿಂಹದ ವಿಗ್ರಹಗಳನ್ನ ನೋಡಿ ಮಗ  ಕಿರುಚುತ್ತಾ ಹೇಳಿದ "ಅಪ್ಪಾ !!ಓಡು ಓಡು ಇಲ್ಲಿ ಸಿಂಹಗಳು ಇದ್ದಾವೆ ನಮ್ಮನ್ನು ತಿಂದುಬಿಡುತ್ತವೆ...." ಓಡುತ್ತಿದ್ದ ಮಗನನ್ನು ನಿಲ್ಲಿಸಿ ತಂದೆ ಹೇಳಿದ "ಭಯ ಬೇಡ ಮಗೂ ಅವು ಕಲ್ಲಿನ ಸಿಂಹಗಳು ಅವುಗಳಿಂದ ನಮಗೆ ಏನೂ ಆಗುವುದಿಲ್ಲ."...ಮಗ ಮರುಪ್ರಶ್ನೆ ಎಸೆದ "ಕಲ್ಲಿನ ಸಿಂಹಗಳಿಂದ ನಮಗೆ ಏನೂ ಆಗುವುದಿಲ್ಲ ಎನ್ನುವುದಾದರೆ ಕಲ್ಲಿನ ದೇವರಿಂದ ಏನಾದರೂ ಆಗುತ್ತದೆ ಎಂದು ಹೇಗೆ ನಿರೀಕ್ಷಿಸುತ್ತೀಯೆ ಅಪ್ಪಾ..!! ?"
ತಂದೆ ತನ್ನ ಡೈರಿಯಲ್ಲಿ ಈ ರೀತಿ ಬರೆಯುತ್ತಾನೆ.."'ಇದುವರೆಗೆ ನನ್ನ ಮಗನ ಪ್ರಶ್ನೆ ಗೆ ಉತ್ತರ ಕೊಡಲು ಸಾಧ್ಯವಾಗಿಲ್ಲ .ಅಂದಿನಿಂದ ಕಲ್ಲಿನ ವಿಗ್ರಹ ಬಿಟ್ಟು ಮನುಷ್ಯರಲ್ಲಿ ದೇವರನ್ನು ಹುಡುಕಲು ಪ್ರಾರಂಭಿಸಿದೆ..ದೇವರನ್ನು ಕಾಣಲಾಗಲಿಲ್ಲ ಆದರೆ ಮಾನವೀಯತೆಯನ್ನು ಕಂಡೆ"...
ಎಂಥಾ ಮಾತು   !!!!


* found via WhatsApp *

No comments:

Post a Comment