ಸಂಖ್ಯೆ ಐದು ಹಿಂದೂ ಸಂಸ್ಕೃತಿಯಲ್ಲಿ ಒಂದು ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಏನಾದರೂ ಪೂಜಿಸುವಾಗ ಐದು ಬೊಟ್ಟು ಕುಂಕುಮ , ಭಂಡಾರ ಇಡುವುದು ಸಾಮಾನ್ಯ . ಭಾರತದಲ್ಲಿ , ಅದೂ ಗ್ರಾಮೀಣ ಪ್ರದೇಶದಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಐದು ಸಣ್ಣ ಕಲ್ಲುಗಳನ್ನು ಪೂಜಿಸುವ ವಾಡಿಕೆಯಿದೆ. ಈ ಐದು ಹಿಂದೂ ಸಂಸ್ಕೃತಿಯಲ್ಲಿ ಯಾಕಿಷ್ಟು ವೈಶಿಷ್ಟ್ಯ ಪಡೆದಿದೆ ಎಂದರೆ;
ಆಕಾಶ, ವಾಯು, ಅಗ್ನಿ, ನೀರು, ಭೂಮಿ ಎಂಬ ಪಂಚಭೂತ;
ಸತ್ಯ, ಧರ್ಮ, ನ್ಯಾಯ, ಪ್ರೀತಿ, ಸಂಯಮ ಎಂಬ ಪಂಚತತ್ವಗಳು;
ಚಿನ್ನ, ಬೆಳ್ಳಿ, ಟ್ರ, ಕಬ್ಬಿನ, ಹಿತ್ತಾಳೆ ಎಂಬ ಪಂಚಲೋಹ;
ಕಣ್ಣು, ಕಿವಿ, ಮೂಗು, ಬಾಯಿ, ಚರ್ಮ ಎಂಬ ಪಂಚ ಇಂದ್ರಿಯಗಳು ಇತ್ಯಾದಿ ಇತ್ಯಾದಿ ಪ್ರತಿನಿಧಿಸುತ್ತವೆ.
ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣ ಐದು ಹರಳುಗಳನ್ನು ಎರಡು ಬಾರಿ ಉಪಯೋಗಿಸಿದ್ದಾನೆ.
ಒಂದು;
ಕೌರವ ಸೇನೆ ದ್ರುಪದ ರಾಜನ ಜೊತೆ ಸೋತ ನಂತರ ಪಾಂಡು ಪುತ್ರರು ದ್ರುಪದ ರಾಜನ ಮೇಲೆ ದಾಳಿ ಮಾಡಿ, ಅರ್ಜುನನು ದ್ರುಪದ ರಾಜನು ರಚಿಸಿದ ಚಕ್ರವ್ಯೂಹ ಭೇಧಿಸಿ, ದ್ರುಪದನ ಎದುರು ಬಿಲ್ಲು ಹೂಡಿದಾಗ ತನ್ನ ವಿಶಿಷ್ಟ ಶಕ್ತಿಯಿಂದ ದ್ರುಪದ ರಾಜನು ತನ್ನನ್ನು ತಾನು ಐದು ಜನ ದ್ರುಪದರನ್ನಾಗಿಸಿ ವಿಭಜಿಸಿಕೊಂಡು ಅರ್ಜುನನಲ್ಲಿ ದ್ವಂದ್ವ ಉಂಟು ಮಾಡುತ್ತಾನೆ. ಆಗ ಅಚಾನಕ್ ಆಗಿ ಅರ್ಜುನನ ಬಳಿ ಇದ್ದ, ಕೆಲ ದಿನಗಳ ಹಿಂದೆ ಶ್ರೀಕೃಷ ಸುಭದ್ರೆಯ ಮೂಲಕ ಅರ್ಜುನನಿಗೆ ತಲುಪಿಸಿದ ಐದು ಹರಳುಗಳು ಭೂಮಿಯ ಮೇಲೆ ಬೀಳುತ್ತವೆ. ಆ ಹರಲುಗಳ ಮೇಲೆ ಎರೆಡೆರಡು ಬೇರೆ ಬೇರೆ ದಿಕ್ಕಿನತ್ತ ಮುಖ ಮಾಡಿರುವ ಚುಕ್ಕಿಗಳಿರುತ್ತವೆ. ಈ ಸಂಕೇತಗಳ ಆಧಾರದ ಮೇಲೆ ಅರ್ಜುನನು ನಿಜವಾದ ದ್ರುಪದ ರಾಜ ಯಾರೆಂದು ಪತ್ತೆಮಾಡಿ ಬಂಧಿಸುತ್ತಾನೆ.
ಕೌರವ ಸೇನೆ ದ್ರುಪದ ರಾಜನ ಜೊತೆ ಸೋತ ನಂತರ ಪಾಂಡು ಪುತ್ರರು ದ್ರುಪದ ರಾಜನ ಮೇಲೆ ದಾಳಿ ಮಾಡಿ, ಅರ್ಜುನನು ದ್ರುಪದ ರಾಜನು ರಚಿಸಿದ ಚಕ್ರವ್ಯೂಹ ಭೇಧಿಸಿ, ದ್ರುಪದನ ಎದುರು ಬಿಲ್ಲು ಹೂಡಿದಾಗ ತನ್ನ ವಿಶಿಷ್ಟ ಶಕ್ತಿಯಿಂದ ದ್ರುಪದ ರಾಜನು ತನ್ನನ್ನು ತಾನು ಐದು ಜನ ದ್ರುಪದರನ್ನಾಗಿಸಿ ವಿಭಜಿಸಿಕೊಂಡು ಅರ್ಜುನನಲ್ಲಿ ದ್ವಂದ್ವ ಉಂಟು ಮಾಡುತ್ತಾನೆ. ಆಗ ಅಚಾನಕ್ ಆಗಿ ಅರ್ಜುನನ ಬಳಿ ಇದ್ದ, ಕೆಲ ದಿನಗಳ ಹಿಂದೆ ಶ್ರೀಕೃಷ ಸುಭದ್ರೆಯ ಮೂಲಕ ಅರ್ಜುನನಿಗೆ ತಲುಪಿಸಿದ ಐದು ಹರಳುಗಳು ಭೂಮಿಯ ಮೇಲೆ ಬೀಳುತ್ತವೆ. ಆ ಹರಲುಗಳ ಮೇಲೆ ಎರೆಡೆರಡು ಬೇರೆ ಬೇರೆ ದಿಕ್ಕಿನತ್ತ ಮುಖ ಮಾಡಿರುವ ಚುಕ್ಕಿಗಳಿರುತ್ತವೆ. ಈ ಸಂಕೇತಗಳ ಆಧಾರದ ಮೇಲೆ ಅರ್ಜುನನು ನಿಜವಾದ ದ್ರುಪದ ರಾಜ ಯಾರೆಂದು ಪತ್ತೆಮಾಡಿ ಬಂಧಿಸುತ್ತಾನೆ.
ಎರಡು, ಪಾಂಡು ಪುತ್ರರು ದ್ರೌಪದಿಯನ್ನೊಳಗೊಂಡು ಇಂದ್ರಪ್ರಸ್ಥದಲ್ಲಿ ಹೊಸ ನಗರ ನಿರ್ಮಿಸಿ ವಾಸವಿರುವಾಗ ಶ್ರೀ ಕೃಷ್ಣನು ದ್ರೌಪದಿಗೆ ಅದೇ ಐದು ಹರಳುಗಳನ್ನು ನೀಡಿ ಧರ್ಮದ ಪಥದಲ್ಲಿ, ಸತ್ಯವನ್ನು ಬಿಡದೇ, ನ್ಯಾಯಯುತವಾಗಿ, ಪ್ರೀತಿಯಿಂದ, ಎಲ್ಲವನ್ನೂ ಸಂಯಮದಿಂದ ಕಾಪಾಡಿಕೊಂಡು ಪಾಂಡು ಪುತ್ರರ ಜೊತೆಗೆ ಸಂಸಾರ ನಡೆಸುವ ಕುರಿತು ಮಾರ್ಗದರ್ಶನ ಮಾಡುತ್ತಾನೆ.
ಕುರುಕ್ಷೇತ್ರ ಯುದ್ಧದಲ್ಲಿ ಅದೇ ಐದು ಹರಳುಗಳನ್ನು ಅರ್ಜುನ ಮತ್ತು ಸುಭದ್ರೆಯ ಮಗ ಅಭಿಮನ್ಯುವಿನ ತೋಳಿಗೆ ದ್ರೌಪದಿ ಕಟ್ಟಿ, 'ಈ ಐದು ಹರಳುಗಳು ನಿನ್ನ ಕೈಯಲ್ಲಿರುವವರೆಗೆ ನಿನಗೆ ಪಾಂಡುಪುತ್ರರ ರಕ್ಷಣೆ ಇರುತ್ತದೆ.' ಎಂದು ಹೇಳಿರುತ್ತಾಳೆ. ಕುರುಕ್ಷೇತ್ರ ಯುದ್ಧದ ಒಂದು ದಿನ ಅಭಿಮನ್ಯು ಯುದ್ಧಕ್ಕೆ ಹೊರಡುತ್ತಿರುವಾಗ ಆ ಹರಳಿನ ಕಟ್ಟು ಕಳಚಿ ಬೀಳುತ್ತದೆ. ಅದು ಕೃಷ್ಣನಿಗೆ ತಿಳಿಯುತ್ತದೆಯಾದರೂ ಏನೂ ಮಾಡದೇ ಪಾರ್ಥ ಸಾರಥಿಯಾಗಿ ಯುದ್ಧಕ್ಕೆ ಹೋಗುತ್ತಾರೆ.
ಅಂದಿನ ಯುದ್ಧದಲ್ಲಿ, ಕೌರವ ಸೇನೆ ಹಿಂದಿನ ದಿನ ಅಭಿಮನ್ಯುವಿನ ದಾಳಿಯಿಂದ ತತ್ತರಿಸಿ ಹೋಗಿರುತ್ತದೆ. ಹಾಗಾಗಿ, ಅಭಿಮನ್ಯುನನ್ನು ವಧಿಸುವುದು ಕೌರವರ ಅಂದಿನ ಎಲ್ಲ ವ್ಯೂಹಗಳ ಏಕಮಾತ್ರ ಉದ್ದೇಶವಾಗಿರುತ್ತದೆ. ಶಕುನಿಯ ಕಪಟತನದಿಂದ ಅರ್ಜುನನನ್ನು ಅಭಿಮನ್ಯುವಿನಿಂದ ದೂರಾತಿ ದೂರ ಸರಿಸಿ, ಚಕ್ರವ್ಯೂಹ ರಚಿಸಿ ಕೌರವರು ಅಭಿಮನ್ಯುನನ್ನು ವಧಿಸುತ್ತಾರೆ.
ಕೃಷ್ಣನಿಗೆ ಅಭಿಮನ್ಯುವಿನ ಸಾವು ನಿಶ್ಚಿತ ಎಂದು ತಿಳಿದಿದ್ದರೂ, ಅಭಿಮನ್ಯು ತನ್ನ ಸ್ವಂತ ತಂಗಿಯ ಮಗನೇ ಆಗಿದ್ದರೂ ಅವನನ್ನು ಉಳಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಕೃಷ್ಣ ಮಾಡುವುದಿಲ್ಲ. ಇಡೀ ಸೃಷ್ಟಿಯೇ ನಾರಾಯಣನ ಕೈಯಲ್ಲಿರುವಾಗ ಅಭಿಮನ್ಯುವನ್ನು ಉಳಿಸಿಕೊಳ್ಳುವುದು ಕೃಷ್ಣನಿಗೆ ದೊಡ್ಡ ಕೆಲಸವೇನಾಗಿರಲಿಲ್ಲ. ಆದರೆ, ಕೃಷ್ಣನ ಯೋಜನೆ ಸೃಷ್ಠಿಯ ಜನನ-ಮರಣಗಳ ಚಕ್ರದಿಂದ ಹೊರತು ಪಡಿಸಿ ವಿಶಿಷ್ಠ ಶಕ್ತಿಗಳ ಮೂಲಕ ಜನ್ಮ ಪಡೆದವರ ಮೂಲಕ ಧರ್ಮ ಸ್ಥಾಪನೆ ಮಾಡುವುದಿತ್ತು.
ಇದೇ ಕಾರಣಕ್ಕಾಗಿ ಕೃಷ್ಣನು, ದುರ್ವಾಸ ಮುನಿಯು ನೀಡಿದ ಮಂತ್ರ ವರದ ಮೂಲಕ ಕುಂತಿದೇವಿ ಪಾಂಡು ರಾಜನೊಂದಿಗೆ ಸಂಪರ್ಕಕ್ಕೆ ಬರದೇ ಮಂತ್ರ ಪಠಣೆಯ ಮೂಲಕ ಯಮನಿಂದ ಯುಧಿಷ್ಠಿರನನ್ನು, ವಾಯುವಿನಿಂದ ಭೀಮನನ್ನು, ಇಂದ್ರನಿಂದ ಅರ್ಜುನನನ್ನು, ಅಶ್ವಿನಿ ದೇವತೆಗಳಿಂದ ನಕುಲ-ಸಹದೇವ (ಮಾದ್ರಿಗೆ) ರನ್ನು ಪಡೆದಿರುತ್ತಾಳೆ. ಹಾಗಾಗಿ, ಈ ಪಾಂಡು ಪುತ್ರರನ್ನು ಕೃಷ್ಣ ಧರ್ಮ ಸ್ಥಾಪನೆಗೆ ಆಯ್ದುಕೊಳ್ಳುತ್ತಾನೆ.
ದ್ರೌಪದಿ;
ದ್ರುಪದ ರಾಜ ಮತ್ತು ದ್ರೋಣರು ಗುರು ಭಾರದ್ವಾಜರ ಆಶ್ರಮದಲ್ಲಿ ಜ್ಞಾನಾರ್ಜನೆ ಮಾಡುವಾಗ ದ್ರೋಣ ಬಡವನಿರುತ್ತನೆ. ಮತ್ತು ದ್ರುಪದನು ರಾಜ ಇರುತ್ತಾನೆ. ದ್ರುಪದನು ದ್ರೋಣರಿಗೆ ಅವಮಾನ ಮಾಡಿದ್ದಕ್ಕೆ ದ್ರೋಣ ಕೊಲ್ಲಲು ಸಮರ್ಥ ಗಂಡು ಸಂತಾನ ಬೇಕು ಎಂದು ಸಾವಿರಾರು ಮುನಿಗಳ ಹತ್ತಿರ ಬೇಡಿಕೊಂಡರು ಅದು ನೆರವೇರುವುದಿಲ್ಲ. ಆಗ 3 ಮುನಿಗಳು ಯಜ್ಞ ನಡೆಸಿಕೊಡಲು ಒಪ್ಪಿಕೊಂಡು ಒಂದು ಕರರು ಹಾಕುತ್ತಾರೆ. ಈ ಯಜ್ಞದ ನಂತರ ನಿನಗೆ ಗಂಡು ಸಂತಾನ ಸಿಗುತ್ತದೆ. ಜೊತೆಗೆ ಒಂದು ಹೆಣ್ಣು ಸಂತನವು ಇದೆ ಅದನ್ನು ನೀನು ಪಡೆಯಲೇಬೇಕು. ಯಜ್ಞ ಫಲವಾಗಿ ಯಜ್ಞಕುಂಡದಿಂದ ಗಂಡು ಮಗು ದೃಷ್ಠ್ಯದ್ಯುಮ್ನ ಬರುತ್ತಾನೆ. ದ್ರುಪದ ರಾಜ ಗಂಡು ಸಂತಾನ ಒಂದೇ ಸಾಕೆಂದು ಯಜ್ಞ ತ್ಯಜಿಸಿ ಹೋಗುತ್ತಾನೆ. ಆಗ ಮುನಿಗಳು ಎಷ್ಟು ಬೇಡಿಕೊಂಡರು ದ್ರುಪದ ರಾಜ ಅವರನ್ನು ನಿಂದಿಸಿ ಹೋಗಲು ಸಿದ್ಧನಾಗುತ್ತಾನೆ ಆಗ ಯಜ್ಞದಲ್ಲಿ ಬೆಂಕಿ ಜ್ವಾಲೆ ಹೆಚ್ಚಾಗಿ ಆಕಾಶಕ್ಕೆ ಮುಟ್ಟುತ್ತದೆ. ಈ ಘೋರತೆಯನ್ನು ಕಂಡು ದ್ರುಪದ ರಾಜ ಒಂದು ವಿಚಿತ್ರ ಕೋರಿಕೆಯ ಮೂಲಕ ಯಜ್ಞನಿರತನಗುತ್ತಾನೆ. ಏನೆಂದರೆ ಬರುವ ಸ್ತ್ರೀ ಸಂತಾನ ಹೇಗಿರಬೇಕು ಎಂದರೆ ಅವಳಿಗೆ ಯಾರಿಗೂ ಬರದಂತ ಕಷ್ಟಗಳು ಬರಬೇಕು, ಎಲ್ಲರಿಂದಲೂ ಹಿಯಾಳಿಕೆ, ತಾತ್ಸಾರ, ಆಗಬೇಕು. ಇಷ್ಟಾದರೂ ಅವಳು ಯಾರನ್ನು ದ್ವೇಷಿಸಬಾರದು ಅಂತ ಸ್ತ್ರೀ ಸಂತಾನ ಕೊಡು ಎಂದು ಕೇಳಿ ಯಜ್ಞದಲ್ಲಿ ಪಾಲ್ಗೊಳ್ಳುತ್ತಾನ. ಇದರ ಫಲವೇ ಯಜ್ಞಾಸೇನಿ. ಯಜ್ಞಾಸೇನಿ ಎಂಬುದು ದ್ರೌಪದಿಯ ಇನ್ನೊಂದು ಹೆಸರು.
ಪಾಂಡುಪುತ್ರರು ಮತ್ತು ದ್ರೌಪದಿಯು ಜನನ-ಮರಣದ ಚಕ್ರದಲ್ಲಿ ಬಂದವರಲ್ಲವಾದ್ದರಿಂದ ಕೃಷ್ಣ ಭಾಗವನಾನು ಇವರ ಮೂಲಕ ಧರ್ಮ ಸ್ಥಾಪಿಸುವನು.
ಇದರಲ್ಲೇನಾದರೂ ತಪ್ಪುಗಳಿದ್ದರೆ, ತಿದ್ದಿಕೊಳ್ಳುವ ಮನಸ್ಸಿದೆ. ತಪ್ಪಿದ್ದರೆ ತಿಳಿಸಿ.
ಪಾಂಡುಪುತ್ರರು ಮತ್ತು ದ್ರೌಪದಿಯು ಜನನ-ಮರಣದ ಚಕ್ರದಲ್ಲಿ ಬಂದವರಲ್ಲವಾದ್ದರಿಂದ ಕೃಷ್ಣ ಭಾಗವನಾನು ಇವರ ಮೂಲಕ ಧರ್ಮ ಸ್ಥಾಪಿಸುವನು.
ಇದರಲ್ಲೇನಾದರೂ ತಪ್ಪುಗಳಿದ್ದರೆ, ತಿದ್ದಿಕೊಳ್ಳುವ ಮನಸ್ಸಿದೆ. ತಪ್ಪಿದ್ದರೆ ತಿಳಿಸಿ.
ಸತ್ಯ ಸುಂದರ,
ReplyDeleteಮುಂದುವರೆಯಲಿ.....
ಸತ್ಯ ಸುಂದರ,
ReplyDeleteಮುಂದುವರೆಯಲಿ.....