ನಾವಿಬ್ಬರೇ ಮನೆಯಲಿ
ಇಂದು ನಾಳೆ ಎರಡು ದಿನ ;
'ಏನು ಮಾಡುವುದು?
ಏನು ಬಿಡುವುದು?'
ಎಂದು ನಮ್ಮನ್ನು
ನಾವೇ ಕೇಳಿಕೊಂಡು
ತುಟಿ ಕಚ್ಚಿಕೊಂಡೆವು.
ನಾಚಿ, ಏನೂ ಹೇಳದೇ
ಒಳಗೋಡಿ ಹೋಗಿ ನಿಂತು ಮರೆಯಲಿ
ಕಾಲ್ಬೆರಳಿನಿಂದ ರಂಗೋಲಿ ಹಾಕುತ್ತ
ನಿಂತಿರುವಳು ಮನದನ್ನೆ.
ಇಷ್ಟು ಸಾಕಲ್ಲವೇ ?
ಎಲ್ಲವೂ ತಿಳಿಯಲು ...
"ಸ್ವರ್ಗದಲೆ ನಮ್ಮ ವಿಹಾರ" ಎಂದು
ಕಣ್ಣ ಸನ್ನೆಯಲಿ ಕೇಳಲು
"ಥು, ಏನ್ರೀ ನೀವು...."
ಎನುತಲೆ ಅಪ್ಪಿಕೊಂಡಳು ಬಿಗಿದು.
✍ ಸತೀಶ ಉ ನಡಗಡ್ಡಿ
No comments:
Post a Comment