Friday 11 December 2015

ಮತ್ತೆ ಬರುವೆ



ಹೋಗುತಿಹದು ಕೊನೆಯ ಪಯಣ
ನೆರೆದ ನೂರು ಜನರ ಮಧ್ಯೆ
ಪಡೆದುಕೊಂಡು ಅಂತಿಮ ನಮನ
ನಾಲ್ಕು ಜನರ ಹೆಗಲ ಮೇಲೆ

ಅಳುತ ಕಳುಹಿದಿರೆಂದರೆ ನೀವು
ನನಗದೆಲ್ಲಿಯ ಶಾಂತಿ ? ನೆಮ್ಮದಿ ?
ಹರುಷದಿಂದ ಕಳುಹಿರಿಂದೆನ್ನನು
ಮರುಜನ್ಮವಿದ್ದರೆ ಮತ್ತೆ ಬರುವೆ.

ಉದಯಾಸ್ತಮಾನದ ನಡುವೆ
ಸುದೈವದ ಕೈ ಕೆಳಗೆ- ಅಂತೆ
ಬಣ್ಣ ಹಚ್ಚಿ, ಪಾತ್ರ ನಿರ್ವಹಿಸಿ
ನಿಶ್ಚಿಂತನಾಗಿ ಹೊರಟಿರುವೆ ನಸುನಗುತ.

ತಂದೆ ಎಂದರೆ ನನಗಾದೀತು
ತೊಂದರೆ; ಯಾಕೆಂದರೆ...
ನಾನಾಗಲಿಲ್ಲ ಆದರ್ಶ ತಂದೆ.
ಮತ್ತೆ ಬರುವೆ ಮಗನ ಮಗನಾಗಿ.

ಒಲವಿನೊಡಲ ಮಡದಿಯೆ
ಕ್ಷಮಿಸು ನನ್ನ; ದಡ ಸೇರಿಸದೇ
ಭವ ಸಾಗರದ ನಡು ನೀರಿನಲ್ಲಿ
ದೂಡಿ ನಿನ್ನ ಹೊರಟು ಬಿಟ್ಟೆನು.
                  - ಸತೀಶ ಉ ನಡಗಡ್ಡಿ

No comments:

Post a Comment