ಹೋಗುತಿಹದು ಕೊನೆಯ ಪಯಣ
ನೆರೆದ ನೂರು ಜನರ ಮಧ್ಯೆ
ಪಡೆದುಕೊಂಡು ಅಂತಿಮ ನಮನ
ನಾಲ್ಕು ಜನರ ಹೆಗಲ ಮೇಲೆ
ಅಳುತ ಕಳುಹಿದಿರೆಂದರೆ ನೀವು
ನನಗದೆಲ್ಲಿಯ ಶಾಂತಿ ? ನೆಮ್ಮದಿ ?
ಹರುಷದಿಂದ ಕಳುಹಿರಿಂದೆನ್ನನು
ಮರುಜನ್ಮವಿದ್ದರೆ ಮತ್ತೆ ಬರುವೆ.
ಉದಯಾಸ್ತಮಾನದ ನಡುವೆ
ಸುದೈವದ ಕೈ ಕೆಳಗೆ- ಅಂತೆ
ಬಣ್ಣ ಹಚ್ಚಿ, ಪಾತ್ರ ನಿರ್ವಹಿಸಿ
ನಿಶ್ಚಿಂತನಾಗಿ ಹೊರಟಿರುವೆ ನಸುನಗುತ.
ತಂದೆ ಎಂದರೆ ನನಗಾದೀತು
ತೊಂದರೆ; ಯಾಕೆಂದರೆ...
ನಾನಾಗಲಿಲ್ಲ ಆದರ್ಶ ತಂದೆ.
ಮತ್ತೆ ಬರುವೆ ಮಗನ ಮಗನಾಗಿ.
ಒಲವಿನೊಡಲ ಮಡದಿಯೆ
ಕ್ಷಮಿಸು ನನ್ನ; ದಡ
ಸೇರಿಸದೇ
ಭವ ಸಾಗರದ ನಡು ನೀರಿನಲ್ಲಿ
ದೂಡಿ ನಿನ್ನ ಹೊರಟು
ಬಿಟ್ಟೆನು.
- ಸತೀಶ
ಉ ನಡಗಡ್ಡಿ
No comments:
Post a Comment