ನಸುಗೆಂಪು ಹಳದಿಯಾಗಸ
ಎಷ್ಟು ನೋಡಿದರೂ ಆಗದಾಯಾಸ.
ನವಿರಾಗಿ ಬೀಸುವ ತಂಗಾಳಿ,
ಮಿಗ-ಕಗಗಳ ನಾದ ಕೇಳಿ
ನಿಸರ್ಗ ದೇವಿಗೊಂದು ನಮನ
ಸಲ್ಲಿಸಿದೆ ಹೃತ್ಪೂರ್ವಕವಾಗಿ ಮನ.
ಊರ ಕೆರೆಯಿಂದ ಮನೆಯೆಡೆಗೆ
ಹಸು,ಎಮ್ಮೆ,ಕುರಿ ಕಾಯ್ವ ಬೀ(ವೀ)ರನ ನಡಿಗೆ
ಅದೇಕೊ ರುಮಾಲೆಳೆವ ನಾಯಿ
ಉಧ್ಗರಿಸಿ ಬಿಟ್ಟ. ’ತಗೊಂಡ್ ಸಾಯಿ’
ಖೇತಗಳಿಂದ ಮರಳುವ
ರೈತನ ಹೆಜ್ಜೆ ಹೆಜ್ಜೆಗೆ ಮಡದಿಯ ಜೀವ.
ಹುಟ್ಟಿದ ಹನ್ನೆರಡು ಗಂಟೆಗೆ
ಸಾಯಲನಿಯಾದ ಸರಿಹೊತ್ತಿಗೆ.
ಯಾರನೂ ಕೇಳದೆ ಹೇಳದೆ;
ನೋಡು ಕಾಲ ಚಕ್ರ ತಿರುಗುತಿದೆ.
ಅದರೊಂದಿಗೆ ಸಾಗಬೇಕೆಲ್ಲ
ನಿನಗಾಗಿ ಅದು ಕಾಯುವುದಿಲ್ಲ.ತಿಳಿದಿಕೊ.
- ಸತೀಶ
ಉ ನಡಗಡ್ಡಿ
No comments:
Post a Comment